Friday, 28 April 2017

ಸಂತೆ


ಸಂತೆ


ಜೋಳಿಗೆ ಹಿಡಿದ ಮಧುರ ಜೀವನದ ಸಂತೆ
ಕಳೆದು ಹೋಯಿತು ಕಹಿಯ ಜೀವನದ ಕಂತೆ
ಬಿಕರಿಗಿಟ್ಟ ಸಾಮಾನು......ಮಾನಗಳು.....
ಬಿಕರಿಯಾಗದೆ ಉಳಿದ ಮನಗಳು......
ಕಾಲ ವರ್ಷಾಧಾರೆಯಲಿ ತೇಲಿದ ಮನ ಮಾನಗಳು
ಉಳಿದು ಹೋದವೋ.......ಮಾನಗಳು?
ಅಳಿದು ಹೋದವೋ.......ಮನಗಳು?
ಇದಕುತ್ತರ ಗೊತ್ತೇ ......ಮಾನ ಬಿಕರಿಗಿಟ್ಟ ಮಾನವಂತರೇ?
ಮುಂದೇನಾಯಿತು ಗೊತ್ತೇ........ಮನವಂತರೇ?
ಕದಡಿ ಹೋದವು ಪ್ರತಿಷ್ಠೆ ಮಾನಗಳು
ಮುದುಡಿ ಹೋದವು ಕೋಮಲ ಮನಗಳು


-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

No comments:

Post a Comment