Thursday, 6 April 2017

ಜೇಡರ ಹುಳು


ಜೇಡರ ಹುಳು


ಅಳುಕದಿರು ಮನವೆ,
ಅಸಹಾಯಕತೆ ಮೆಟ್ಟಿ ಎದೆಯುಬ್ಬಿಸುವ ಹೊತ್ತು
ಅಳುಕದಿರು ಮನವೆ,
ನೋವಿನ ಸರಳು ಕಳಚಿ ನಲಿಯುವ ಹೊತ್ತು
ಅಳುಕದಿರು ಮನವೆ,
ಅತ್ತುಸುಸ್ತಾಗಿ ಆನಂದಬಾಷ್ಪ ಸುರಿಸುವ ಹೊತ್ತು
ಅಳುಕದಿರು ಮನವೆ,
ದಿಟಹೂರಣ ಬಯಲಾಗಿ ಸುಳ್ಳುಹರಣದ ಹೊತ್ತು
ಅಳುಕದಿರು ಮನವೆ,
ಅಣುಕಣವೂ ಬಣ್ಣದ ರಂಗೋಲಿಯಾಗುವ ಹೊತ್ತು
ಅಳುಕದಿರು ಮನವೆ,
ಮಂಜು ಕರಗಿ ಕಿರಣ ಸೂಸುವ ಹೊತ್ತು
ಅಳುಕದಿರು ಮನವೆ,
ಹೆಣೆದ ಬಲೆಯ ಒಡೆಯ ನೀ ಜೇಡರಹುಳುವಾಗೋ ಹೊತ್ತು


-- ಮಹೇಶ ಶ್ರೀ. ದೇಶಪಾಂಡೆ
ತುಷಾರಪ್ರಿಯ

**__**__**

No comments:

Post a Comment